ಜೀವನ ಸಾಗರ

ಜೀವನವೊಂದು ಭವ ಸಾಗರವು
ಈ ಭವ ಸಾಗರದಲಿ ದಾಟಿ ಹೋಗು
ಪರಮಾತ್ಮನ ನಾಮದಲಿ ಈಜಬೇಕು
ಮುಕ್ತಿ ದಡವನ್ನು ಸೇರಿ ಹೋಗು

ಪ್ರಾಣಾಯಾಮದಲಿ ಕೈ ಕಾಲು ಆಡಿಸು
ಆಗಾಗ ಧ್ಯಾನದಲಿ ಮುಳುಗಬೇಕು
ತನುವಿನ ವಿಷಯ ಕೆಸರು ತೊಳೆಯಬೇಕು
ಮನದಂಬರದಿಂದ ಶುದ್ಧ ಗೊಳಿಸಬೇಕು

ಸತ್ಯದ ವಾಣಿಯಿಂದ ಹುಟ್ಟು ಹಾಕು
ಪ್ರಾಮಾಣಿಕ ತಳ ಆಗಿರಲಿ ಗಾಢ
ಕಾಮಕಾಂಚನ ಬಿರುಗಾಳಿಯತ್ತ ಬೇಡ
ರಾಮನಾಮ ಆಳವಿಲ್ಲದತ್ತ ಜಾರಬೇಡ

ದುರಾಸೆ ಮೊಸಳೆಯತ್ತ ಹೋಗದಿರು
ಲೋಭ ತಿಮಿಂಗಿಲನತ್ತ ದುಡುಕದಿರು
ಆ ಶಾಂತ ನೀರಿನ ಸುಖ ನಂಬದಿರು
ಮುಂದೆ ಬರುವಸು ನೀರ ಸುಳಿಗೆ ನೀರಿದ ಒಡ್ಡದಿರು

ನಿನ್ನ ನಂಬಿದವರಿಗೆಲ್ಲ ಕೈ ನೀಡಿ ಸಾಗು
ಅವರಿಗೆಲ್ಲ ಎಚ್ಚರದಲ್ಲಿ ಇರಲು ಹೇಳು
ಸಾಗರವನ್ನು ದಾಟಿ ದಡ ಸೇರಿದರಾಯ್ತ
ಮಾಣಿಕ್ಯ ವಿಠಲನ ನಂಬಿ ಬಾಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೬
Next post ಓ ಭಾನು

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys